ಕಾರವಾರ:- ಹೆಣ್ಣು ಚಿರತೆ ಕಳೆಬರಹ ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಿಸನಗೋಡಿನ ಸಾವನಗದ್ದೆಯಲ್ಲಿ ನಡೆದಿದೆ.
ಆನಗೋಡ ದಿಂದ ಸಾವನಗದ್ದೆ ಹೋಗುವ ರಸ್ತೆಯಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದ ಚಿರತೆ ಕಳೆಬರಹ ಪತ್ತೆಯಾಗಿದೆ.ಸ್ಥಳಕ್ಕೆ ಯಲ್ಲಾಪುರ ವಿಭಾಗದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ಯಲ್ಲಾಪುರ ಪಶು ಆಸ್ಪತ್ರೆಗೆ ಕಳೆಬರಹವನ್ನು ಮರಣೋತ್ತರ ಪರೀಕ್ಷೆ ನಡೆಸಿ
ವನ್ಯಜೀವಿ ಸಂರಕ್ಷಣಾಕಾಯ್ದೆಯಡಿ ಯಲ್ಲಾಪುರ ವಿಭಾಗದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ