Uttara kannada-ಗೃಹಲಕ್ಷ್ಮೀ ಯೋಜನೆ ಮರಣ ಹೊಂದಿದ 2724 ಖಾತೆಗೆ ಹಣ ಜಮ- ಖಾತೆ ಇಲ್ಲದವರಿಗೂ ಹಣ ಜಮಾ !
ಕಾರವಾರ :- ಗೃಹಲಕ್ಷ್ಮೀ ಯೋಜನೆಯಲ್ಲಿ ( Gruha LakshmiScheme) ಆದ ಲೋಪವನ್ನು ಸರಿಪಡಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಇದರ ಬೆನ್ನಲ್ಲೇ ನಕಲಿ ಖಾತೆ ,ಮೃತರ ಖಾತೆಗೆ ಜಮವಾದ ಹಣವನ್ನು ಮರಳಿ ಪಡೆಯುತ್ತಿದೆ.
ಇದನ್ನೂ ಓದಿ:-Uttara kannada| ಕ್ಯಾಸಲ್ ರಾಕ್ ರೈಲು ಸೇವೆ ಮತ್ತೆ ಆರಂಭ-ಸಮಯ ಏನು?
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೊಂದಣಿಯಾದ ಫಲಾನುಭವಿಗಳು- 3,38486 ಮಹಿಳೆಯರು ಇದ್ದರೇ ಧನಸಹಾಯ ಪಾವತಿಯಾದ ಫಲಾನುಭವಿಗಳ ಸಂಖ್ಯೆ- 312818 ಇದ್ದು ,
ಆಗಷ್ಟ್ 2023 ರಿಂದ ಮೇ 2026 ರ ವರೆಗೆ ₹1941.94 ಕೋಟಿ ಹಣ ಜಮವಾಗಿದೆ. ಈವರೆಗೆ 2026 ರ ಮೇ ವರೆಗೆ ಮಾತ್ರ ಖಾತೆಗೆ ಹಣ ಜಮ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು-8088 ಜನ ಫಲಾನುಭವಿಗಳು ಮರಣ ಹೊಂದಿದ್ದಾರೆ. ಇದರಲ್ಲಿ 2724 ಜನ ಮರಣ ಹೊಂದಿದ ಖಾತೆಗೆ ಹಣ ಪಾವತಿಯಾಗಿರುವುದು ಪತ್ತೆಯಾಗಿದೆ.ಇದಲ್ಲದೇ ಏಳು ಜನ ಫಲಾನುಭವಿಗಳಲ್ಲಿ ಬ್ಯಾಂಕ್ ಖಾತೆ ಹಾಗೂ ಬ್ಯಾಂಕ್ ಹೆಸರು ಇಲ್ಲದವರಿಗೆ ಹಣ ಜಮವಾಗಿದೆ.
ಬ್ಯಾಂಕ್ ಖಾತೆ ಹೊಂದಿದವರು-1807 ,ಅಂಚೆ ಖಾತೆ- 910 ಫಲಾನುಭವಿಗಳು ಹಾಗೂ ಬ್ಯಾಂಕ್ ಖಾತೆ ಹಾಗೂ ಬ್ಯಾಂಕ್ ಹೆಸರು ಇಲ್ಲದ ಫಲಾನುಭವಿಗಳು – 7 ಗಳ ಖಾತೆಗೆ ಹಣ ಜಮವಾಗಿದ್ದು ,ಇನ್ನೂ ಕೂಡ ಜಿಲ್ಲಾಡಳಿತದ ಇಲಾಖೆಯಿಂದ ಮಾಹಿತಿ ಕಲೆಹಾಕಲಾಗುತ್ತಿದೆ.ಇದನ್ನೂ ಓದಿ:-Karwar| ಮನೆಯಲ್ಲಿ ಅಕ್ರಮ ಗೋವಾ ಮದ್ಯದ ಮಾರಾಟ- ₹3,735 ಮೌಲ್ಯದ ಮದ್ಯ ವಶಕ್ಕೆ ಪಡೆದ ಪೊಲೀಸರು.
ಸದ್ಯ ಮರಣ ಹೊಂದಿದ 8088 ಫಲಾನುಭವಿಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ಕಲೆಹಾಕುತಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
