ಕಾರವಾರ:- ಭಾವಪೂರ್ಣ ಎಂಬ ಕನ್ನಡ ಸಿನಿಮಾ (kannada cinima)ಚಿತ್ರೀಕರಣದ ಸಂದರ್ಭದಲ್ಲಿ ಹೆಜ್ಜೇನು ದಾಳಿಯಾಗಿ
ಸಿನಿಮಾ ಚಿತ್ರೀಕರಣದ ಇಬ್ಬರು ಲೈಟಿಂಗ್ ಸಹಾಯಕರು ಗಂಭೀರವಾಗಿ ಅಸ್ವಸ್ಥರಾಗಿ ಸ್ಥಳದಲ್ಲೇ ಕುಸಿದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಜಮಗೋಡಿನ ರೈಲ್ವೆ ನಿಲ್ದಾಣ ರಸ್ತೆಯ ಕ್ರಾಸ್ ಬಳಿ ಇಂದು ನಡೆದಿದೆ.
ಮಂಡ್ಯ ಮೂಲದ ರಮೇಶ್ ಮತ್ತು ರಾಮು ಹೆಜ್ಜೇನು ಕಡಿತಕ್ಕೊಳಗಾದ ಲೈಟಿಂಗ್ ಸಹಾಯಕರಾಗಿದ್ದಾರೆ. ಹೆಜ್ಜೇನು ದಾಳಿಯಿಂದ ಸ್ಥಳದಲ್ಲಿದ್ದ ಚಿತ್ರತಂಡದ ಕೆಲಸಗಾರರು,ತಂತ್ರಜ್ಞರು,ನಟರು ಕಾಲ್ಕಿತ್ತಿದ್ದು ಈ ವೇಳೆ ಈ ಇಬ್ಬರು ಹೆಚ್ಚಿನ ದಾಳಿಗೆ ಒಳಗಾಗಿದ್ದು ನೂರಾರು ಜೇನುಗಳು ಇವರ ಮೇಲೆ ದಾಳಿನಡೆಸಿದ ಪರಿಣಾಮ ಸ್ಥಳದಲ್ಲೇ ಕುಸಿದುಬಿದ್ದಿದ್ದು ಸಹಾಯ ಸಹ ಮಾಡಲಾಗದ ಪರಿಸ್ತಿತಿ ನಿರ್ಮಾಣವಾಗಿತ್ತು.
ನಂತರ ಸ್ತಳೀಯ ಆಟೋ ಚಾಲಕನ ಸಹಾಯದಿಂದ 108 ಗೆ ಕರೆಮಾಡಿ ಇವರನ್ನು ರಕ್ಷಿಸಿ ಅಂಕೋಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.