Karwar|ಸಂಪರ್ಕಕ್ಕೆ ಸಿಗದ ಶಿರಾಲಿಯ ರಶ್ಮಿ | ಕುಟುಂಬದಲ್ಲೂ ದಂದ್ವ!ಏನಂದ್ರು ಕುಟುಂಬದವರು?
Bhatkal news:- ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48 ಸೀಬರ್ಡ್ ಬಸ್ಸಿನಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal)ತಾಲೂಕಿನ ಶಿರಾಲಿಯ ರಶ್ಮಿ ಮಹಾಲೆ (23) ಬದುಕುಳಿದಿದ್ದು ,ಸಂಬಂಧಿಕರಿಗೆ ಸಂಪರ್ಕಿಸಿ ತಾನು ಉದುಕುಳಿದಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಶಿರಾಲಿಯ ರಶ್ಮಿ ರವರ ತಾಯಿ ಸವಿತಾ ರವರಿಗೆ ಸಂಪರ್ಕಿಸಿದಾಗ ತಮಗೆ ಸಂಪರ್ಕ ಮಾಡಿಲ್ಲ ,ಪೋನ್ ಸ್ವಿಚ್ ಆಪ್ ಬಂದಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಅವರ ಸ್ನೇಹಿತರು ಸಂಪರ್ಕಿಸಿದ್ದರು,ನಾವು ಸುರಕ್ಷಿತವಾಗಿ ಇದ್ದೇವೆ ರಶ್ಮಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೀಗಾಗಿ ರಶ್ಮಿ ಸಂಪರ್ಕಕ್ಕೆ ಸಿಕ್ಕ ನಂತರವೇ ಸೂಕ್ತ ಮಾಹಿತಿ ಹೊರಬರಬೇಕಿದೆ.
8 ಜನ ಸಾವು ಅಧಿಕೃತ -ಐಜಿಪಿ

ಚಿತ್ರದುರ್ಗದಲ್ಲಿ ಸೀಬರ್ಡ್ ಬಸ್ಸಿನಲ್ಲಿದ್ದ 8 ಪ್ರಯಾಣಿಕರು, ಲಾರಿ ಡ್ರೈವರ್ ಸೇರಿ 9 ಮಂದಿ ಸಾವು ಮೃತಪಟ್ಟಿದ್ದಾರೆ ಎಂದು ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ.
Bhatkal| ಡ್ರಂಕ್ ಅಂಡ್ ಡ್ರೈವ್ ಪ್ರಕರಣ: ಭಟ್ಕಳ ಗ್ರಾಮೀಣ ಠಾಣೆ ಸಿಪಿಐ ,ಹೆಚ್.ಪಿ.ಸಿ ಅಮಾನತು.
ಗೊರ್ಲತ್ತು ಗ್ರಾಮದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಬಸ್ಸಿನಿಂದ ಎಂಟು ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಓರ್ವ ಲಾರಿ ಚಾಲಕ ಸೇರಿ ಸದ್ಯದ ಮಾಹಿತಿ ಪ್ರಕಾರ 9 ಜನ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಶಿರಾ ಹಾಗೂ ಹಿರಿಯೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿದೆ. ಬೆಂಗಳೂರಿನಿಂದ ಡಿಎನ್ಎ ಅಂಡ್ ಸುಕೋ ಟೀಂ ಬಂದಿದೆ ಎಂದು ಹೇಳಿದರು.
Bhatkal| ಸಮುದ್ರದಲ್ಲಿ ಮುಳಗಿ ಇಬ್ಬರು ಸಾವು
ಸೀಬರ್ಡ್ ಬಸ್ಸಿನಲ್ಲಿದ್ದ 21 ಜನರು ಪತ್ತೆಯಾಗಿದ್ದು 11 ಜನರು ಪತ್ತೆಯಾಗಿಲ್ಲ ಎಂದು ಚಿತ್ರದುರ್ಗ ಎಸ್ಪಿ ರಂಜಿತ್ ಹೇಳಿದ್ದಾರೆ. ಸೀಬರ್ಡ್ ಬಸ್ಸಿನಲ್ಲಿದ್ದ 21 ಜನರು ಪತ್ತೆ ಆಗಿದ್ದು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ. ಈ ಪೈಕಿ ಆರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

ಲಾರಿ ಚಾಲಕ ನಿದ್ದೆ ಮಂಪರಿನಲ್ಲಿ ಅಪಘಾತ ನಡೆದಿರುವ ಸಾಧ್ಯತೆಯಿದೆ. ಚಾಲಕ ನಿರ್ವಾಹಕ ಸೇರಿ ಸೀಬರ್ಡ್ ಬಸ್ಸಿನಲ್ಲಿ 32 ಜನ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ನೀಡಿದರು.
