ಕಾರವಾರ ,ಮಾರ್ಚ 12, :- ನಾನು ಇರೋತನಕ ಖಂಡಿತ ಕಾಂಗ್ರೆಸ್ಗೆ ನೆಮ್ಮದಿ ಕೊಡೋದಿಲ್ಲ, ಕಾಂಗ್ರೆಸ್ (Congress )ನಾಯಕರು ಯಾರಿಗೆ ಕೇಳಿದ್ರೂ ಕರಿಮಣಿ ಮಾಲೀಕ ನಾನಲ್ಲ ಅಂತಿದ್ದಾರೆ ,ರಾಹುಲ್ ಗಾಂಧಿ (Rahul Gandhi) ಆಲೂಗಡ್ಡೆಯಿಂದ ಬಂಗಾರ (gold) ತೆಗಿತಿದ್ದಾನೆ ಎಂದು ಸಂಸದ ಅನಂತಕುಮಾರ್ ಹೆಗಡೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಮಂಗಳವಾರ ಕಾರವಾರದ ಬಿಜೆಪಿ (Bjp) ಕಚೇರಿಯಲ್ಲಿ ಮಾತನಾಡಿದ ಅವರು
ಕಾಂಗ್ರೆಸ್ ನಾಯಕರು ಯಾರಿಗೆ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ, ಅಜ ಗಜಾಂತರ ಆನೆಗೂ ಕುರಿಗೂ ಇರುವಂತಹ ವ್ಯತ್ಯಾಸ ವಿದೆ.
ಇದನ್ನೂ ಓದಿ:-ಪೊಲೀಸರ ಎದುರೇ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಂಸದ ಅನಂತಕುಮಾರ್ ಹೆಗಡೆ!
ಸ್ವಲ್ಪ ಬುದ್ದಿ ಇದ್ದವರಿಗೂ ಗೊತ್ತಾಗುತ್ತೆ ಆನೆ ಆನೆಯೇ, ಕುರಿ ಕುರಿಯೇ,ಇದನ್ನೇ ಇಟ್ಟುಕೊಂಡು ನಾಳೆ ಕಾಂಗ್ರೆಸ್ನವರು ಪ್ರತಿಭಟನೆ ಮಾಡಬಹುದು ದೇಶವನ್ನ ಲೂಟಿ ಮಾಡುವ ಕಾಂಗ್ರೆಸ್, ಮಹಿಳಾ ವಿರೋಧಿ ಕಾಂಗ್ರೆಸ್,ದೇಶದಲ್ಲಿ ಕಾಂಗ್ರೆಸ್ ಮಾಡಿರುವ ಅವಾಂತರಗಳನ್ನ ನೋಡಿದ್ರೆ ಯಾರಿಗೂ ನಿದ್ದೆ ಬರಲ್ಲ,ವೈಯಕ್ತಿಕ ಬದುಕಿರಲಿ, ರಾಜಕೀಯವಿರಲಿ ನೀತಿ, ನಿಯತ್ತು ಇರಲೇಬೇಕು .
ಇಲ್ಲವಾದಲ್ಲಿ ವ್ಯಕ್ತಿತ್ವ ಬೆಳೆಯೋದಕ್ಕೆ ಸಾಧ್ಯವೇ ಇಲ್ಲ. ದೇಶದ ನೀತಿ, ನೀಯತ್ತನ್ನ ಕುಲಗೆಡಿಸಿದ್ದೇ ಕಾಂಗ್ರೆಸ್,ಅವರಿಗೆ ನೀತಿ ಇಲ್ಲ, ನೀಯತ್ತಂತೂ ಮೊದಲೇ ಇಲ್ಲ. ಕ್ರಾಂತಿ ಆದ್ರೇನೆ ಶಾಂತಿ ಸಿಗೋದು,ಜಿ20 ಕಾರ್ಯಕ್ರಮದ ಬಳಿಕ ಇಡೀ ಜಗತ್ತೇ ಭಾರತವನ್ನ ಹೊಗಳಿತು,ಆದ್ರೆ ರಾಹುಲ್ ಗಾಂಧಿ ಎಲ್ಲಿದ್ರು ಯಾರಿಗೂ ಗೊತ್ತಿಲ್ಲ,ರಾಹುಲ್ ಗಾಂಧಿ ಆಲೂಗಡ್ಡೆಯಿಂದ ಬಂಗಾರ ತೆಗಿತಿದ್ದಾನೆ,ಪ್ರಬಲ ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ಇಲ್ಲ,ನೈತಿಕವಾಗಿ ಕಾಂಗ್ರೆಸ್ಗೆ ನಿಲುವೇ ಇಲ್ಲ, ಸಂಘಟನಾತ್ಮಕವಾಗಿಯೂ ಕಾಂಗ್ರೆಸ್ ಇಲ್ಲ, ಪ್ರಧಾನಿ ಮೋದಿ ಸರ್ಕಾರ ಬರುವ ಮುನ್ನ ಕಾಂಗ್ರೆಸ್ ಅಧಿಕಾರ ಮಾಡಿತ್ತು.ಕುರುಡರಿಗೆ ಯಾವುತ್ತೂ ಹೆಚ್ಚಿಗೆ ತಿಳಿಸಬೇಕಾದ ಅವಶ್ಯಕತೆ ಇರೋದಿಲ್ಲ,ಆದ್ರೆ ಪೂರ್ವಾಗ್ರಹ ಪೀಡಿತ ಕುರುಡರಿಗೆ ಹೇಳಿದ್ರೂ ಒಪ್ಪೋದಿಲ್ಲ,ಸತ್ಯ ಎದ್ದು ಕೂರುವ ಒಳಗೇ ಸುಳ್ಳು ಇಡೀ ಜಗತ್ತನ್ನ ಓಡಾಡಿಕೊಂಡು ಬಂದಿತ್ತಂತೆ ಎಂದರು.
ಇದನ್ನೂ ಓದಿ:- ಸಂಸದ ಅನಂತಕುಮಾರ್ ಹೆಗಡೆ ದೂರವಿಟ್ಟು ರಾಜ್ಯ ಬಿಜೆಪಿ ಟ್ವೀಟ್ ! ಕಾರಣ ಏನು?
ಇನ್ನು ನಿಜಕ್ಕೂ ಸಿದ್ರಾಮಯ್ಯರಿಗೆ ಧಮ್ ಇದ್ರೆ ಕರ್ನಾಟಕದ ಆರ್ಥಿಕತೆಯ ಬಗ್ಗೆ ಶ್ವೇತಪತ್ರ ಹೊರಡಿಸಲಿ,ಕಾಂಗ್ರೆಸ್ ಸರ್ಕಾರದಲ್ಲಿ ಎಂಎಲ್ಎಗಳಿಗೆ ಕೊಡಲೂ ದುಡ್ಡಿಲ್ಲ,ಇಂತಹ ದೇನಾಸಿ ಸ್ಥಿತಿಯನ್ನ ಒಂದು ವರ್ಷದಲ್ಲಿ ಕಾಂಗ್ರೆಸ್ ತಂದಿಟ್ಟಿದೆ ಎಂದ ಹೆಗಡೆ ದೂರಿದರು.
ಪಕ್ಷದಲ್ಲಿ ಅಭ್ಯರ್ಥಿ ಯಾರೇ ಇರಲಿ ಬಿಜೆಪಿ ಗೆಲುವು ಸಾಧಿಸಬೇಕು ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿ ಬಿಜೆಪಿಗೆ ಮತ ನೀಡಲು ಸಿದ್ಧನಾಗಿದ್ದಾನೆ ಹಾಗಾಗಿ ನಮ್ಮ ಪಕ್ಷದಿಂದ 21 ಜನ ಆಕಾಂಕ್ಷಿಗಳಾಗಿ ಅರ್ಜಿ ಹಾಕಿದ್ರು ಎಂದರು.