ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಗೋಕರ್ಣ ದೇವಸ್ಥಾನ ನಿರ್ವಹಣೆಗೆ ಸಮಿತಿ ರಚನೆ ಮಾಡಿ 15 ದಿನದಲ್ಲಿ ರಾಮಚಂದ್ರಪುರ ಮಠದಿಂದ ದೇವಸ್ಥಾನವನ್ನು ಹಿಂಪಡೆಯಲು ಸುಪ್ರೀಂ ಕೋರ್ಟ ಸೂಚನೆ ನೀಡಿದೆ.
ಈ ಹಿನ್ನಲೆಯಲ್ಲಿ ಗೋಕರ್ಣದಲ್ಲಿ ಅನುವಂಶೀಯ ಅರ್ಚಕರು ಇಂದು ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
2008 ರಲ್ಲಿ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಅಂದಿನ ಬಿಜೆಪಿ ನೇತ್ರತ್ವದ ಯಡಿಯೀರಪ್ಪ ನೇತ್ರತ್ವದ ಸರ್ಕಾರ ದೇವಸ್ಥಾನವನ್ನು ಹಸ್ತಾಂತರ ಮಾಡಿತ್ತು.
ಈ ಬಗ್ಗೆ ಶೀ ಕ್ಷೇತ್ರ ಗೋಕರ್ಣ ಹಿತರಕ್ಷಣಾ ಸಮಿತಿಯವರು ನ್ಯಾಯಾಲಯ ಮೆಟ್ಟಿಲೇರಿದ್ದರು.
ಸುಪ್ರೀಂ ಕೋರ್ಟ ನಿವೃತ್ತ ನ್ಯಾ.ಬಿ.ಎನ್ .ಶ್ರೀಕೃಷ್ಣ ನೇತ್ರತ್ವದಲ್ಲಿ
ಜಿಲ್ಲಾಧಿಕಾರಿ, ಎಸಿ ಒಳಗೊಂಡ ಸಮಿತಿ ಯನ್ನು 15 ದಿನದಲ್ಲಿ ರಚಿಸಿ ಹಸ್ತಾಂತರ ಮಾಡುವಂತೆ ಸೂಚನೆ ನೀಡಿದೆ.
![](https://kannadavani.news/wp-content/uploads/2021/04/IMG-20210419-WA0008-1024x576.jpg)
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಬಳಿ ಅನುವಂಶೀಯ ಅರ್ಚಕರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.