Uttara kannada | ಸಾತೇರಿ ಹಾಗೂ ನಾಗನಾಥ ದೇವಾಲಯದಲ್ಲಿ ಕಳ್ಳತನ

Broken donation box at Sateri and Naganatha Temple in Ramanagar, Joida, Uttara Kannada, following a temple theft Broken donation box at Sateri and Naganatha Temple in Ramanagar, Joida, Uttara Kannada, following a temple theft

IMG 20260913 WA0009Karwar Shetty Eye Hospital

Ad karwar auto
ಕಾರವಾರ ದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಬಟ್ಟೆಗಳಿಗೆ ಹೊಳಪು ನೀಡುವ ಆರೋ ಡ್ರೈಕ್ಲೀನ್ -ಒಮ್ನೆ ಭೇಟಿ ನೀಡಿ

ಕಾರವಾರ/ರಾಮನಗರದ :- ಉತ್ತರ ಕನ್ನಡ ಜಿಲ್ಲೆಯ (uttrakannada )ಜೋಯಿಡಾ ತಾಲೂಕಿನ ರಾಮನಗರದ(ramnagar) ಪ್ರಸಿದ್ಧ ಸಾತೇರಿ ಹಾಗೂ ನಾಗನಾಥ ದೇವಸ್ಥಾನದಲ್ಲಿ ಮಧ್ಯರಾತ್ರಿ ವೇಳೆ ಕಳ್ಳರು ದೇವಾಲಯದಲ್ಲಿ ಇದ್ದ ಕಾಣಿಕೆ ಡಬ್ಬಿ ವಡೆದು ನಗನಾಣ್ಯ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ:-Ramnagar | ಹೋಮ್ ಸ್ಟೇ ನಲ್ಲಿ ರೇವ್ ಪಾರ್ಟಿ | ಮಾದಕ ವಸ್ತುಗಳ ಪತ್ತೆ ಮಾಡಿ 150 ಯುವಕ ,ಯುವತಿಯರ ಬಂಧನ

ಸಾತೇರಿ ಮತ್ತು ನಾಗನಾಥ ದೇವಾಲಯವು ಒಂದೇ ಆವರಣದಲ್ಲಿ ಇದ್ದು ಕಳ್ಳರು ದೇವಾಲಯದ ಬೀಗ ಮುರಿದು ಒಳಹೊಕ್ಕಿದ್ದಾರೆ. ನಂತರ ನಾಗನಾಥ ದೇವಾಲಯದ ಮೂರು ಬೆಳ್ಳಿ ನಾಗಮೂರ್ತಿ ಹಾಗೂ ಕಾಣಿಕೆ ಡಬ್ಬಿ ಒಡೆದು ₹12 ಸಾವಿರಕ್ಕೂ ಹೆಚ್ಚು ಹಣ ದೋಚಿದ್ದಾರೆ. ಇದನ್ನೂ ಓದಿ:-Joida |ಮೂಢನಂಬಿಕೆ ಭಯಕ್ಕೆ ಗ್ರಾಮ ತೊರೆದ ಗೌಳಿ ಕುಟುಂಬಗಳು-ಇಡೀ ಗ್ರಾಮಗಳೇ ಖಾಲಿ !

Advertisement

ಬೆಳಗ್ಗೆ ದೇವಾಲಯಕ್ಕೆ ಪೂಜೆಗೆ ಅರ್ಚಕರು ಬಂದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ನಂತರ ದೇವಾಲಯದ ಆಡಳಿತ ಮಂಡಳಿ ರಾಮನಗರದ ಪೊಲೀಸರಿಗೆ ಮಾಹಿತಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ:-Uttara kannada |ಪ್ರತಿ ತಾಲೂಕಿನಲ್ಲೂ ಡಿಜಿಟಲ್ ಲೈಬ್ರರಿ ನಿರ್ಮಾಣ-ಲಕ್ಷ್ಮಣ್ ಸವದಿ

 ಉಳಿದಂತೆ ಹೆಚ್ಚಿನ ಮಾಹಿತಿ ಬರಬೇಕಿದ್ದು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ದೇವಾಲಯದ  ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿ ಕಳ್ಳರನ್ನ ಹೆಡೆಮುರಿ ಕಟ್ಟಿದ್ದರು.ಆದರೇ ಇದೀಗ ಮಲೆನಾಡು ಭಾಗದಲ್ಲಿ ದೇವಾಲಯದ ಕಳ್ಳತನ ವರದಿಯಾಗುತ್ತಿದೆ.

Kannadavani WhatsApp image
ಪ್ರತಿ ದಿನದ ಸುದ್ದಿ ಓದಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಫೋಟೋ ದ ಮೇಲೆ ಕ್ಲಿಕ್ ಮಾಡಿ
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement