ಕಾರವಾರ :- ಪಿತ್ರಾರ್ಜಿತವಾಗಿ ಬಂದ ಮೂರು ಎಕರೆ ಜಮೀನು ಹಂಚಿಕೆ ವಿಚಾರದಲ್ಲಿ ಸಹೋದರ ನಡುವೆ ಕಲಹ ಏರ್ಪಟ್ಟು ಅಣ್ಣನಿಗೆ ತಮ್ಮಂದಿರು ಕತ್ತಿ ಹಿಡಿದು ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಬೆಡಸಗಾಂ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ:-Honnavara|ಗುಡ್ಡ ಕುಸಿತ ಅಪಾಯದಿಂದ ಪಾರಾದ ಕುಟುಂಬ
ಅಶೋಕ್ ನಾಯ್ಕ, ರಾಮ ನಾಯ್ಕ ಎಂಬುವವರೇ ಹಲ್ಲೆ ಮಾಡಿದವರಾಗಿದ್ದು,ಈಶ್ವರ ನಾಯ್ಕ ಹಲ್ಲೆಗೊಳಗಾದವರಾಗಿದ್ದಾರೆ. ತಮ್ಮ ಜಮೀನಿನಲ್ಲಿ ಸಹೋದರ ನಡುವೆ ಮಾತಿಗೆ ಮಾತು ಬೆಳೆದಿದ್ದು ,ಈಶ್ವರ ನಾಯ್ಕ ಸಹೋದರರಾದ ಅಶೋಕ್ ನಾಯ್ಕ,ರಾಮನಾಯ್ಕ ಕತ್ತಿ ಹಿಡಿದು ಅಣ್ಣನನ್ನು ಹೊಲದಲ್ಲಿ ಅಡ್ಡಾಡಿಸಿಕೊಂಡು ಬಂದಿದ್ದು ಪಕ್ಕದಲ್ಲೇ ಇದ್ದವರು ಇವರ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.
ಇನ್ನು ಇಬ್ಬರು ಸಹೋದರರು ಕತ್ತಿಯ ಹಿಂಭಾಗದಿಂದ ಅಣ್ಣನಿಗೆ ಹಲ್ಲೆ ಮಾಡಿದ್ದು ,ಈಶ್ವರ ನಾಯ್ಕರ ಕಣ್ಣಿಗೆ, ಕಾಲಿಗೆ ಹೊಡೆತ ಬಿದ್ದಿದೆ.ಅದೃಷ್ಟವಶಾತ್ ದೊಡ್ಡ ಮಟ್ಟದ ಗಾಸಿಯಾಗಿಲ್ಲ.ಹಲ್ಲೆಗೊಳಗಾದ ಈಶ್ವರ ನಾಯ್ಕ ರನ್ನು
ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಘಟನೆ ಕುರಿತು ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-ಹಳಿಯಾಳದಲ್ಲಿ ಆನೆ ಕಾಟ! ಕೃಷಿ ಜಮೀನಿಗೆ ನುಗ್ಗಿ ರಂಪಾಟ|Video ನೋಡಿ