ಉತ್ತರ ಕನ್ನಡ ಜಿಲ್ಲೆಯ ಈ ಗ್ರಾಮಪಂಚಾಯ್ತಿಯಲ್ಲಿ ಚುನಾವಣೆ ನಡೆಯದು?ಯಾಕೆ ಗೊತ್ತಾ?

TextMaster 12 04 11.32.10 TextMaster 12 04 11.32.10

ಕಾರವಾರ:- ಗ್ರಾಮಪಂಚಾಯ್ತಿ ಚುನಾವಣೆ ಘೋಷಣೆ ಮಾಡಲಾಗಿದೆ.ಆದ್ರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಾಲ್ಕು ಗ್ರಾಮಪಂಚಾಯ್ತಿಯನ್ನು ಚುನಾವಣೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.

ಹೌದು ಕರ್ನಾಟಕ ಚುನಾವಣಾ ಆಯೋಗವು ಕ್ರಮ ಸಂಖ್ಯೆ(೧)ರಲ್ಲಿ ಬದಲಾದ ಆದೇಶದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ್ ಅಧಿನಿಯಮ 1993 ರ ಪ್ರಕರಣ 308 ರಲ್ಲಿ ಬಿತ್ತರವಾಗಿರು ಅಧಿಕಾರದ ಮೇರೆಗೆ ರಾಜ್ಯದ 30 ಜಿಲ್ಲೆಗಳ ಒಟ್ಟು 6004 ಗ್ರಾಮಪಂಚಾಯ್ತಿಯಲ್ಲಿ ಡಿಸೆಂಬರ್ 2020 ರ ನಂತರ ಅವಧಿ ಪೂರ್ಣಗೊಳ್ಳಲಿರುವ 162 ಗ್ರಾಮಪಂಚಾಯ್ತಿಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ 6 ಗ್ರಾಮಪಂಚಾಯ್ತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿರುವ ಒಟ್ಟು 74 ಗ್ರಾಮಪಂಚಾಯ್ತಿಗಳು,ಒಟ್ಟಾರೆ 242 ಗ್ರಾಮಪಂಚಾಯ್ತಿ ಹೊರತುಪಡಿಸಿ ಉಳಿದ 5762 ಗ್ರಾಮಪಂಚಾಯ್ತಿಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಗ್ರಾಮಪಂಚಾಯ್ತಿ ಅಧಿನಿಯಮ, 1993 ರ ಪ್ರಕರಣ 308AA ಮತ್ತು 308 AB ಅನ್ವಯ ಹಾಗೂ ಕರ್ನಾಟಕ ಪಂಚಾಯತ್ ರಾಜ್ ನಿಯಮ ,1993 ರ ನಿಯಮ 12 ರ ಅನ್ವಯ ಚುನಾವಣೆಯನ್ನು ಘೋಷಿಸಿದೆ.

Advertisement

ಚುನಾವಣೆ ನಡೆಯದ ಗ್ರಾಮಪಂಚಾಯ್ತಿಗಳು.

ಹೊನ್ನಾವರ :- ಮಂಕಿ(ಗುಳದಕೇರಿ),ಮಂಕಿ-ಎ (ಹಳೆಮರ), ಮಂಕಿ-ಬಿ (ಅನಂತವಾಡಿ),ಮಂಕಿ-ಸಿ(ಚಿತ್ತಾರ) ಈ ಪಂಚಾಯ್ತಿಗಳಿಗೆ ಗ್ರಾ.ಪಂ. ಚುನಾವಣೆ ನಡೆಯದು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement