ಕಾರವಾರದಲ್ಲಿ ಚೇತರಿಸಿಕೊಂಡ ಕಾಂಗ್ರೆಸ್:ಸತೀಶ್ ಸೈಲ್ ನೇತ್ರತ್ವದಲ್ಲಿ ಸ್ಥಳೀಯ ಚುನಾವಣೆ ಕುರಿತು ಸಭೆ.

IMG 20201205 WA0056 IMG 20201205 WA0056

ಇಂದು ಅಮದಳ್ಳಿಯಲ್ಲಿ ಮುಂಬರುವ ಗ್ರಾಮ ಪಂಚಾಯತ ಚುನಾವಣಾ ಪೂರ್ವತಯಾರಿ ಸಭೆಯನ್ನು ಮಾಜಿ ಶಾಸಕರಾದ ಸತೀಶ ಕೆ ಸೈಲ್ ಇವರ ಮುಂದಾಳತ್ವದಲ್ಲಿ ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಮೀರ ನಾಯ್ಕ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚರ್ಚಿಸಲಾಯಿತು.

ಪ್ರಸ್ತುತ ನಮಗೆ ಅಧಿಕಾರ ಇಲ್ಲದಿರಬಹುದು ಆದರೆ ಜನರಿಗೆ ಕಾಂಗ್ರೆಸ್ ಸರ್ಕಾರದ ಅನೇಕ ಉತ್ತಮ ಯೋಜನೆಗಳ ಮಾಹಿತಿ ಜನರಿಗಿದೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರು ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ.

ಎಲ್ಲರೂ ಸ್ಥಳೀಯವಾಗಿರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ದುಡಿಯಿರಿ ನಿಮ್ಮ ಪಕ್ಷ ನಿಷ್ಟೆ ನಿಮಗೆ ಉನ್ನತ ಸ್ನಾನಮಾನಗಳು ಲಭಿಸಲಿವೆ ಅಧಿಕಾರ ಮುಖ್ಯ ಅಲ್ಲಾ ಜನಸೇವೆ ಪ್ರಮುಖ ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಸ್ಪರ್ಧಿಸಿ ಎಂದು ಕಿವಿಮಾತು ಹೇಳಿದರು‌.

Advertisement

ಡಿ ಕೆ ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕೇಡರ ಬೇಸ್ ಪಕ್ಷವಾಗಿ ರೂಪುಗೊಳ್ಳುತ್ತಿದ್ದು ತಳಮಟ್ಟದಲ್ಲಿ ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿಯುವ ಕಾರ್ಯಯರ್ತರಿಗೆ ಪಕ್ಷವು ಮುಂದೆ ಉತ್ತಮ ಅವಕಾಶಗಳನ್ನು ಒದಗಿಸಲಿದೆ ಎಂದು ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಸಮೀರ ನಾಯ್ಕ ತಿಳಿಸಿದರು.

ವೇದಿಕೆಯಲ್ಲಿದ್ದ ತಾ ಪಂ ಮಾಜಿ ಸದಸ್ಯರಾದ ಉಮಾಕಾಂತ ಹರಿಕಂತ್ರ, ರವೀಂದ್ರ ಅಮದಳ್ಳಿ, ಸಂಜಯ ಸಾಳುಂಕೆ ಸಾಂಧರ್ಭಿಕವಾಗಿ ಮಾತನಾಡಿದರು, ಪುರುಷೋತ್ತಮ ಗೌಡ ಸ್ವಾಗತಿಸಿದರೆ ಯುವ ಕಾಂಗ್ರೆಸ್ ಆದ್ಯಕ್ಷರಾದ ನಾಗರಾಜ ಗೌಡ ಬಿಣಗಾ ಎಲ್ಲರನ್ನೂ ಅಭಿನಂದಿಸಿದರು. ಅಮದಳ್ಳಿ ಮಾಜಿ ಗ್ರಾ.ಪಂ ಸದಸ್ಯರಾಗಿದ್ದ ರೇಣುಕಾ ಗುನಗಾ, ಸಾವಿತ್ರಿ ಗೌಡ, ಜೀವನಾ ಅಮದಳ್ಳಿ ಮುಂತಾದ ಮುಖಂಡರು ಉಪಸ್ತಿತರಿದ್ದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement