ಪೊಲೀಸರಿಗೆ ಸೀಮೆಯೆಣ್ಣೆ ಎರಚಿ ಬೆಂಕಿಹಚ್ಚಲು ಯತ್ನಿಸಿದ ಫೈರ್ ಲೇಡಿ!

112

ಕುಂದಾಪುರ:- ಮಹಿಳೆಯೊಬ್ಬಳು ತನಿಖೆಗೆ ಬಂದ ಪೊಲೀಸರಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಲು ಪ್ರಯತ್ನಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ (Kundapura) ತಾಲೂಕಿನ ಕೋಟೇಶ್ವರದಲ್ಲಿ (koteshwara )ನಡೆದಿದೆ.

ಘಟನೆ ಏನು?

ನಿಯಮಬಾಹಿರವಾಗಿ ಅಂಗಡಿ ವ್ಯಾಪಾರ ನಡೆಸುವ ವಿಚಾರದಲ್ಲಿ ಸರೋಜಾ ದಾಸ್ ಮತ್ತು ಗ್ರಾಮಸ್ಥರ ನಡುವೆ ತಿಕ್ಕಾಟ ಇತ್ತು. ಹಲವಾರು ಬಾರಿ ಇದೇ ವಿಚಾರಕ್ಕೆ ಜಟಾಪಟಿಯೂ ನಡೆದಿತ್ತು. ಕರ್ತವ್ಯದಲ್ಲಿದ್ದ ಪೊಲೀಸರಿಗೆ ಸೀಮೆಎಣ್ಣೆ ಎರಚಿ ಬೆಂಕಿ ಕೊಡುವಷ್ಟರ ಮಟ್ಟಿಗೆ ಇದು ಮುಂದುವರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆಶ್ಚರ್ಯವಾದರೂ ಸತ್ಯ ಈ ಘಟನೆ ನಡೆದದ್ದು ಕುಂದಾಪುರದಲ್ಲಿ.

ಇದನ್ನೂ ಓದಿ:-ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ಧಾರಣೆ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಅಂಗಡಿ ವಸ್ತುಗಳನ್ನು ಇಟ್ಟು ಮಾರಾಟ ಮಾಡಬಾರದು ಎಂದು ಗ್ರಾಮಸ್ಥರಿಗೂ ಅಂಗಡಿ ಮಾಲಕಿ ಸರೋಜಾ ದಾಸ್ ಗೂ ತಗಾದೆ ನಡೆದಿದೆ.

ಇದನ್ನೂ ಓದಿ:-ಗೋಕರ್ಣ ಮಹಾಬಲೇಶ್ವರನ ದರ್ಶನ ಪಡೆದ ನಾಗರಹಾವು!

ಪೊಲೀಸರಿಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಕುರಿತು ಚರ್ಚೆ ನಡೆಯುತ್ತಿದ್ದಾಗ ಸರೋಜಾ ದಾಸ್ ಬಾಟಲಿಯಲ್ಲಿ ಸೀಮೆ ಎಣ್ಣೆ ಹಿಡಿದು ಸ್ಥಳದಲ್ಲಿದ್ದವರ ಮೇಲೆ ಎರಚಿದ್ದಾರೆ. ನೆಲ ಒರೆಸುವ ಮೋಪ್ ಗೆ ಬೆಂಕಿ ಹಚ್ಚಿ ಜನರತ್ತ ದಾಳಿ ಮಾಡಲು ಯತ್ನಿಸಿದ್ದಾರೆ.

ಕೋಟೇಶ್ವರ ಮುಖ್ಯರಸ್ತೆಯಲ್ಲಿ ಈ ಘಟನೆ ಕೆಲಕಾಲ ಹೈಡ್ರಾಮ ಸೃಷ್ಟಿ ಮಾಡಿದೆ. ಸರೋಜಾ ಅವರ ಟೈಲರ್ ಮತ್ತು ಫ್ಯಾನ್ಸಿ ಸ್ಟೋರ್ ಸಾಮಾನುಗಳನ್ನು ರಸ್ತೆಗೆ ಹರಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದದ್ದು ಇಷ್ಟೆಲ್ಲ ರಂಪಾಟಕ್ಕೆ ಕಾರಣ. ಈ ಬಗ್ಗೆ ಪಂಚಾಯತ್ ಸೂಚನೆ ಕೊಟ್ಟಿದ್ದರು ಆ ಬಗ್ಗೆ ಮಹಿಳೆ ಕ್ಯಾರೇ ಎಂದಿರಲಿಲ್ಲ.

ಇದನ್ನೂ ಓದಿ:-ವಸತಿ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ಆರೋಪದ ಪ್ರಾಂಶುಪಾಲರ ನಿಯುಕ್ತಿ ಸಿಡಿದೆದ್ದ ವಿದ್ಯಾರ್ಥಿಗಳು| ಅನ್ನಾಹಾರ ತ್ಯಜಿಸಿ ಪ್ರತಿಭಟನೆ

ತನಿಖೆಗೆ ಆಗಮಿಸಿದ ಪೊಲೀಸರನ್ನು ಮಹಿಳೆ ನಿಂದಿಸಿದ್ದಾರೆ. ಪೊಲೀಸರಿಗೆ ಸಹ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!