BREAKING NEWS
Search

ಕುಡಿದ ಮತ್ತಲ್ಲಿ ಯಲ್ಲಾಪುರ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾರಿಗೆ ಗುದ್ದಿದ ಟ್ರಾಕ್ಟರ್

143

ಕಾರವಾರ:- ಯಲ್ಲಾಪುರ ಮಾಜಿ ಶಾಸಕ ವಿ.ಎಸ್ ಪಾಟೀಲ್ ಕಾರಿಗೆ ಹಿಂಭಾಗದಿಂದ ಕಬ್ಬು ಕೊಂಡೊಯ್ಯುವ ಟ್ರಾಕ್ಟರ್ ಡಿಕ್ಕಿಹೊಡೆದ ಘಟನೆ ನಡೆದಿದೆ.
ಮುಂಡಗೋಡಿನಿಂದ ಯಲ್ಲಾಪುರಕ್ಕೆ ತೆರಳುವಾಗ ಘಟನೆ ನಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಾಜಿ ಶಾಸಕ ವಿ‌ಎಸ್ ಪಾಟೀಲ್ ಪಾರಾಗಿದ್ದಾರೆ.

ಮಹಾರಾಷ್ಟ್ರ ಮೂಲದ ಟ್ರಾಕ್ಟರ್ ಇದಾಗಿದ್ದು ಮದ್ಯ ಸೇವಿಸಿ ಟ್ರಾಕ್ಟರ್ ಚಲಾಯಿಸಿದ್ದ ಚಾಲಕ ಮುಂಡಗೋಡಿನ ಬನ್ನಿಕಟ್ಟೆ ಯಲ್ಲಿ ನಿಂತಿದ್ದ ಮಾಜಿ ಶಾಸಕರ ಕಾರಿಗೆ ಹಿಂಭಾಗದಿಂದ ಗುದ್ದಿದ್ದಾನೆ.
ನಂತರ ಕುಡಿದ ಮತ್ತಲ್ಲಿ ತನ್ನ ಸ್ನೇಹಿತರೊಂದಿಗೆ ಜಗಳ ಕಾದಿದ್ದು ಹಲ್ಲೆ ಮಾಡಲು ಸಹ ಮುಂದಾಗಿದ್ದರು. ನಂತರ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಾಗಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!