Mangaluru, ಪೆಬ್ರವರಿ 02:-ಮೀನುಗಾರಿಕೆಗೆ ಯಿಂದ ಮರಳುತಿದ್ದ ಬೋಟೊಂದು ಅರಬ್ಬಿ ಸಮುದ್ರ ಮಧ್ಯೆ ಕಲ್ಲುಬಂಡೆಗೆ ಡಿಕ್ಕಿ ಹೊಡೆದು ಅವಘಡಕ್ಕೀಡಾಗಿ ಮುಳುಗಿದ ಘಟನೆ ಮಂಗಳೂರಿನ ಉಳ್ಳಾಲ ಬಳಿಯ ಸಮುದ್ರದಲ್ಲಿ ನಡೆದಿದೆ.
ಇದನ್ನೂ ಓದಿ:-Astrology:ದಿನಭವಿಷ್ಯ02-02-2024
ಬೋಟ್ ನಲ್ಲಿದ್ದ ಐವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದು ಬೋಟ್ (Boat) ಸಮುದ್ರದಲ್ಲಿ ಬೋಟ್ ಸಂಪೂರ್ಣ ಮುಳುಗಡೆಯಾಗಿದೆ.
ಇದನ್ನೂ ಓದಿ:-ಮಂಗಳೂರು-ಮಡಗಾವ್ ನಡುವಿನ ವಿಶೇಷ ರೈಲು ವೇಳಾಪಟ್ಟಿ ಬದಲಾವಣೆ, ಸಮಯಗಳ ವಿವರ ತಿಳಿಯಿರಿ
ಇದರಿಂದಾಗಿ ಮೀನು (fish),ಬಲೆ ಎಲ್ಲವು ಸಮುದ್ರ ಪಾಲಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಉಳ್ಳಾಲ ನಿವಾಸಿ ನಯನಾ ಪಿ ಸುವರ್ಣಗೆ ಸೇರಿದ ಬೋಟ್ ಇದಾಗಿದ್ದು ಈ ಬೋಟ್ ನಲ್ಲಿದ್ದ ಉತ್ತರ ಪ್ರದೇಶ ಮೂಲದ ಮೀನುಗಾರರಾದ ಸಮರ ಬಹುದ್ದೂರು,ರಾಮ್ ಮನೋಜ್, ರೋಹಿತ್,ಪ್ರಕಾಶ್ ಹಾಗೂ ವಾಸು ಎಂಬವರನ್ನು ರಕ್ಷಿಸಲಾಗಿದೆ.
ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.